Posts

Showing posts from March, 2017

"ಪಂಚ" ಕಜ್ಜಾಯ

Image
ಶಹಭಾಷ್! ಮೆಚ್ಚಲೇಬೇಕು.. ಊಟ ಮಾಡಿದರಾಯಿತು ಬಿಟ್ಟರಾಯಿತು .. ನಿದ್ದೆ ಮಾಡಿದರಾಯಿತು ಬಿಟ್ಟರಾಯಿತು.. ಗೆಲ್ಲಲೇ ಬೇಕು ಅಂತ ಪಣತೊಟ್ಟು ಗೆದ್ದು ತೋರಿಸಿದ ಅಮಿತ್ ಶಾ ಮತ್ತು ಮೋದಿ ಜೋಡಿ ಸಾಧನೆ ಅಷ್ಟಿಷ್ಟಲ್ಲ.. ಪಂಜಾಬ್ ಮತ್ತು ಗೋವಾ ದಲ್ಲಿ ಅಧಿಕಾರ ಕಳೆದುಕೊಂಡಿದ್ದು ಬೇಸರವೆನ್ನಿಸದ ರೀತಿಯಲ್ಲಿ ಉತ್ತರ ಪ್ರದೇಶದ ಜನ ಬಿಜೆಪಿಯನ್ನು ಗೆಲ್ಲಿಸುವದರ ಮೂಲಕ ದೊಡ್ಡ ಉಡುಗರೆಯನ್ನೇ ಕೊಟ್ಟಿದ್ದಾರೆ. ನಿಜ ಹೇಳಬೇಕಾದರೆ ಬಿಜೆಪಿ ಕೂಡ ಇಷ್ಟೊಂದು ದೊಡ್ಡಮಟ್ಟದ ಗೆಲುವು ತಮ್ಮದಾಗುತ್ತದೆ ಅಂತ ಊಹಿಸಿರಲೂ ಸಾಧ್ಯವಿಲ್ಲ ಬಿಡಿ.                           ನನಗನ್ನಿಸುವ ಪ್ರಕಾರ ಬಿಜೆಪಿ ಇದನ್ನು ಪಾಸಿಟಿವ್ ಆಗಿ ತಗೆದುಕೊಳ್ಳದೆ ಇದ್ದಾರೆ ಒಳ್ಳೆಯದು. ಕೇಳಬಹುದು ಅದು ಹೇಗೆ ಅಷ್ಟು easy ಆಗಿ ಹೇಳುತ್ತಿದ್ದೀರಾ, ಇದೇನು ಸಾಧನೆ ಅಲ್ಲವೇ ಅಂತ. ಪಂಚ ರಾಜ್ಯಗಳ ಫಲಿತಾಂಶ ನೋಡಿದಾಗ ಹಾಗನ್ನಿಸುತ್ತದೆ. ಆ ರಾಜ್ಯಗಳ ಸರ್ಕಾರಗಳ ಆಡಳಿತ ಸರಿ ಅನ್ನಿಸದೆ ಬೇರೆಯವರಿಗೆ ಅಧಿಕಾರ ಕೊಟ್ಟು ನೋಡೋಣ ಅಂತ ಜನರು ಆರಿಸಿದ ದಾರಿ ಅಷ್ಟೇ. ಹಾಗೆ ಮೋದಿ ಅಲೆ ಇನ್ನು ಇದೆ ಅನ್ನುವದದಲ್ಲಿ ಮಣಿಪುರ ಗೋವಾ ಮತ್ತು ಪಂಜಾಬ್ ನಲ್ಲಿಕೂಡ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಬೇಕಿತ್ತು.                     ಮುಂದಿನ ವರ್ಷದಲ್ಲಿ ಬರುತ್ತಿರುವ ಕರ್ನಾಟಕದ ಚುನಾವಣೆ ಸುಲಭದ ಚುನಾವಣೆಆದದು. ತ್ರಿಕೋನ ಸ್ಪರ