Posts

ಬೌಧಾಯನ ಶಾಸ್ತ್ರ: ಧರ್ಮ, ಆಚರಣೆ ಮತ್ತು ಗಣಿತದ ಸಂಗಮ

Image
ಭಾರತೀಯ ಜ್ಞಾನಪರಂಪರೆಯಲ್ಲಿ ಋಷಿ ಬೌಧಾಯನರ ಸ್ಥಾನ ವಿಶಿಷ್ಟವಾಗಿದೆ. ಅವರ ಹೆಸರಿನೊಂದಿಗೆ ಸಂಬಂಧಿಸಿದ ಬೌಧಾಯನ ಸೂತ್ರಗಳು ಕೇವಲ ಧಾರ್ಮಿಕ ಆಚರಣೆಗಳ ಗ್ರಂಥಗಳಲ್ಲ; ಅವು ಸಮಾಜದ ನಿಯಮಗಳು, ಗೃಹಸಂಸ್ಕಾರಗಳು, ಯಜ್ಞವಿಧಿಗಳು ಹಾಗೂ ಪ್ರಾಚೀನ ಗಣಿತಜ್ಞಾನದ ಮಹತ್ವದ ದಾಖಲೆಗಳಾಗಿವೆ. ಬೌಧಾಯನರ ಜೀವನಕಾಲದ ನಿಖರ ದಿನಾಂಕ ತಿಳಿದಿಲ್ಲವಾದರೂ, ಅವರನ್ನು ಪ್ರಾಚೀನ ಶೂಲ್ಬಸೂತ್ರಗಳ ಪ್ರಮುಖ ರಚಯಿತರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಬೌಧಾಯನ ಸೂತ್ರಗಳು ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯೊಂದಿಗೆ ಸಂಬಂಧ ಹೊಂದಿವೆ. ಇವು ಸೂತ್ರಶೈಲಿಯಲ್ಲಿ ರಚಿಸಲ್ಪಟ್ಟಿವೆ. ಅಂದರೆ, ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥವನ್ನು ನೀಡುವ ರೀತಿಯ ಬರವಣಿಗೆ. ಈ ಗ್ರಂಥಪರಂಪರೆಯಲ್ಲಿ ವೈದಿಕ ಜೀವನದ ವಿವಿಧ ಅಂಶಗಳಿಗೆ ಸಂಬಂಧಿಸಿದ ಮಾರ್ಗದರ್ಶನ ದೊರೆಯುತ್ತದೆ. ಬೌಧಾಯನ ಶಾಸ್ತ್ರದ ಪ್ರಮುಖ ಭಾಗಗಳಲ್ಲಿ ಶ್ರೌತ ಸೂತ್ರ , ಗೃಹ್ಯ ಸೂತ್ರ , ಧರ್ಮ ಸೂತ್ರ ಮತ್ತು ಶೂಲ್ಬ ಸೂತ್ರ ಗಳನ್ನು ಉಲ್ಲೇಖಿಸಬಹುದು. ಶ್ರೌತ ಸೂತ್ರಗಳಲ್ಲಿ ವೈದಿಕ ಯಜ್ಞಗಳು ಮತ್ತು ಅವುಗಳ ವಿಧಾನಗಳ ವಿವರವಿದೆ. ಗೃಹ್ಯ ಸೂತ್ರಗಳು ಮನೆಮಠದ ಸಂಸ್ಕಾರಗಳು, ವಿವಾಹ, ನಾಮಕರಣ, ಉಪನಯನ ಮೊದಲಾದ ಆಚರಣೆಗಳಿಗೆ ಮಾರ್ಗದರ್ಶನ ನೀಡುತ್ತವೆ. ಧರ್ಮ ಸೂತ್ರಗಳು ವ್ಯಕ್ತಿಯ ಕರ್ತವ್ಯ, ಸಾಮಾಜಿಕ ನಿಯಮ, ವಿದ್ಯಾರ್ಥಿಜೀವನ, ಗೃಹಸ್ಥಾಶ್ರಮ, ವಾರಸುದಾರಿಕೆ ಹಾಗೂ ಪ್ರಾಯಶ್ಚಿತ್ತದಂತಹ ವಿಷಯಗಳನ್ನು ಚರ್ಚಿಸುತ್ತವೆ. ಬೌಧಾಯನರ...

ನಾನೂ ಫೇಮಸ್ ಆಗ್ಬೇಕಲ್ಲ!!

Image
              ಭಗತ್ ಸಿಂಗ್.. ಬೋಸ್.. ಗಾಂಧಿಜಿ... ಅಂಬೇಡ್ಕರ್ ಇವರೆಲ್ಲ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಎಲ್ಲರಿಗೂ ಗೊತ್ತು.. ಹಾ wait.. ಇವರೆಲ್ಲ ನಿಮಗೆ ಹೇಗೆ ಗೊತ್ತು?  ತುಂಬಾ ಹಾಸ್ಯಾಸ್ಪದ ಪ್ರಶ್ನೆ ಅಲ್ವಾ? ಯಾಕಂದ್ರೆ ಇವರಿಂದಲೇ ನಾವಿಂದು ಸ್ವತಂತ್ರ ವಾಗಿದ್ದಿದ್ದು..  ಇಲ್ಲದಿದ್ದರೆ ನೀವಿಂದು ಏನಾಗಿರುತ್ತಿದ್ದೆವೋ ? ಆ ದೇವರೇ ಬಲ್ಲ ...  ಅದೇನೇ ಇರಲಿ ನಾನಿಂದು ಹೇಳಬೇಕಂದು ಹೊರಟಿರುವ ವಿಷಯ ಇತ್ತೀಚಿನ ಸೋಶಿಯಲ್ ಮೀಡಿಯಾ (ಫೇಸ್ಬುಕ್/ಟ್ವಿಟ್ಟರ್ ಇತ್ಯಾದಿ ) ದಲ್ಲಿನ ಬಳಿಕೆದಾರರ ಬಗ್ಗೆ. ಸೋಶಿಯಲ್ ಮೀಡಿಯಾ ಗಳಲ್ಲಿ ಹಲವಾರು ಬಗೆಯ ಜನರಿದ್ದಾರೆ. ಅದರಲ್ಲಿ ಈ ಫೇಮಸ್ ಆಗಬೇಕು ಅಂತ ತೋಚಿದ್ದನ್ನು ಬರೆಯುವ ಜನರಿದ್ದಾರಲ್ಲ ಅವರ ಬಗ್ಗೆ ಅಂತೂ ಹೇಳತೀರದ್ದು.            ಮೊನ್ನೆ YouTube ನಲ್ಲಿ ಫಣಿ ರಾಮಚಂದ್ರ (ಹಿರಿಯ ಬೆಳ್ಳಿ ತೆರೆ ಮತ್ತು ಕಿರುತೆರೆ ನಿರ್ದೇಶಕರು)ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅವರು ಜೀವನದಲ್ಲಿ ಗೆದ್ದಿದ್ದಾರೆ ಸೋತಿದ್ದಾರೆ ನೊಂದಿದ್ದಾರೆ ಎಲ್ಲ ಬಗೆಯ ಅನುಭವವನ್ನು ಪ್ರೇಕ್ಷಕರ ಮುಂದೆ ಇಡುತ್ತಾ ಇನ್ನೊಬ್ಬರು ತಾವು ಮಾಡಿದ ತಪ್ಪನ್ನು ಮಾಡಬಾರದು ಅಂತ ಎಳೆ  ಎಳೆಯಾಗಿ ತಮ್ಮ ಅನುಭವ ಹಂಚಿಕೊಂಡ ವಿಡಿಯೋಗಳ ನ್ನೂ  ಬಿಡದೆ, ಅಲ್ಲೂ ಶಬ್ದ ಮಾಲಿನ್ಯ ಮಾಡಿ ಅವರಿಗೆ ಬ...

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

Image
(2 minute read)  ಭಾರತದಲ್ಲಿ ಹಬ್ಬಗಳಿಗೆ ಆಚರಣೆಗಳಿಗೆ ಏನೊ ಅಭಾವವಿಲ್ಲ ತಿಂಗಳಿಗೆ ಸುಮಾರು 2 ಅಥವಾ 3 ಹಬ್ಬಗಳು ಅಥವಾ ಆಚರಣೆಗಳು ಸಾಮಾನ್ಯ! ಇಷ್ಟೆ ಸಾಕಾಗದೆ ನಾವು ಪಾಶ್ಚಿಮಾತ್ಯ (western ) ಆಚರಣೆಗಳನ್ನೂ ಸಂಭ್ರಮದಿಂದ ಆಚರಿಸಿ ಉದಾರತೆ ಮೆರೆಯುತ್ತೆವೆ. ಆದರೆ ನಿಜಕ್ಕೂ ಪಾಶ್ಚಿಮಾತ್ಯ ಆಚರಣೆಗಳು ನಿಜಕ್ಕೂ ನಾವು ಆಚರಿಸಬೇಕಾ? ಭಾರತೀಯ ಅವಿಭಕ್ತ ಕುಟುಂಬಕ್ಕೆ ಅವುಗಳ ಅವಶ್ಯಕತೆ ಇದೆಯೆ ?     ಒಮ್ಮೆ ನಾನು ಜರ್ಮನಿಯಿಂದ ಭಾರತಕ್ಕೆ ವಾಪಾಸಾಗುತ್ತಿದ್ದೆ. ಏರ್ಪೋರ್ಟ್ ಗೆ ಬರಲೆಂದು ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್ ಚಾಲಕ ಜರ್ಮನ್ ಆಗಿದ್ದ ಆದರೆ ಇಂಗ್ಲಿಷ್ ನಲ್ಲೂ ಮಾತನಾಡುತ್ತಿದ್ದ (ಬಹಳಷ್ಟು ಜರ್ಮನಿ ಜನರಿಗೆ ಜರ್ಮನ ಭಾಷೆ ಹೊರತು ಬೇರೆ ಭಾಷೆ ಬರುವದಿಲ್ಲ). ಹಾಗಾಗಿ ನಾನು ಅವನೊಂದಿಗೆ ಅದು ಇದು ಅಂತೆಲ್ಲಾ ಮಾತನಾಡುತ್ತಿದ್ದೆ. ಹೀಗೆ ನಮ್ಮ ಸಂಭಾಷಣೆ ಮುಂದುವರೆದು ಆ ವ್ಯಕ್ತಿ ತನ್ನ ಪರಿವಾರದ ಬಗ್ಗೆ ಹೇಳಲಾರಂಭಿಸಿದ. ಆತನಿಗೆ 3 ಜನ ಮಕ್ಕಳು. ಮೊದಲನೆ ಮಗಳು 19 ವರ್ಷದವಳು ಅಂದ ನಾನು ಆಶ್ಚರ್ಯವಾಗಿ ಅವನಿಗೆ ಕೇಳಿದೆ what! Seriously? how old are you ? ಅಂತ. ಯಾಕೆಂದರೆ ನೋಡಲು ಅವನಿಗೆ ಅಷ್ಟೇನು ವಯಸ್ಸಾದಂತೆ ಅನಿಸುತ್ತಿರಲಿಲ್ಲ. ಅವನು ನಗುತ್ತಾ ಹೇಳಿದ ನನಗೆ 35 ವರ್ಷ. ಅವಳು ನನ್ನ ಮಲಮಗಳು (step daughter)  ಅಂತ. ಮುಂದುವರೆದು ಅವನು ಹೇಳಿದ ನನ್ನ ಹೆಂಡತಿಯ ಮೊದಲನೆ ಸಂಬಂಧದ 2...

CAA CAB ... ಏನ್ ಇದೆಲ್ಲ?

Image
    ಈ ಆರ್ಟಿಕಲ್ ನ ಉದ್ದೇಶ CAA ಬಗೆಗಿನ ಗೊಂದಲಗಳಿಗೆ ತೆರೆಯೆಳಿಯುವ ಒಂದು ಪ್ರಯತ್ನ... CAB ಮತ್ತು CAA ಒಂದೇ ಅಥವಾ ಬೇರೆ?  ಬಿಲ್ ಅಂದರೆ, ಶಾಸಕಾಂಗದಲ್ಲಿ ತರುವ ಬದಲಾವಣೆಗಳನ್ನು ಮೊದಲು ಬಿಲ್ ರೂಪದಲ್ಲಿ ಮಾರ್ಲಿಮೆಂಟ್ ನಲ್ಲಿ ರತಲಾಗುತ್ತದೆ. ಕೆಳಮನೆ(ಲೋಕಸಭೆ) ಮೆಲ್ಮನೆ (ರಾಜ್ಯಸಭೆ) ಗಳಲ್ಲಿ ಈ ಬಿಲ್ ಪಾಸ್ ಆದಮೇಲೆ ರಾಷ್ಟ್ರಪತಿ ಈ ಬಿಲ್ ಗೆ ಸಮ್ಮತಿರೂಪದಲ್ಲಿ ಸಹಿ ಹಾಕಬೇಕಾಗುತ್ತದೆ. ಸಹಿ ಹಾಕಿದ ಮೇಲೆ ಈ ಬಿಲ್ ಆಕ್ಟ್  (ಆದೇಶ) ಆಗಿ ಮಾರ್ಪಡುತ್ತದೆ. ಅದರಂತೆ CAB ಅಂದರೆ  Citizenship Amendment  Bill  ಮತ್ತು CAA ಅಂದರೆ Citizenship Amendment  Act . CAA ಯಿಂದ ಭಾರತೀಯ ಪ್ರಜೆಗಳಿಗೆ ಆಗುವ ತೊಂದರೆಗಳೇನು ?         CAA ಇಂದ ಭಾರತೀಯರಿಗೆ ಯಾವುದೇ ತೊಂದರೆಗಳಿಲ್ಲ. ಯಾವುದೇ ಭಾರತೀಯನೂ ಯಾವುದೇ ದಾಖಲಾತಿಯನ್ನು ಯಾರಿಗೂ ತೋರಿಸಬೇಕಿಲ್ಲ ಬದಲಾಗಿ CAA ಒಂದು ಆಕ್ಟ್ ಆಗಿದ್ದು ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಫಗಾನಿಸ್ತಾನದ ಹಿಂದುಳಿದ ವರ್ಗಗಳಿಗೆ (ಹಿಂದೂ, ಕ್ರಿಶ್ಚಿಯನ್, ಬುದ್ಧ, ಪಾರಸಿ, ಜೈನ ಮತ್ತು ಸಿಖ್ಖ) ಭಾರತೀಯ ಪೌರತ್ವ ಕೊಡುವರಾದ ಬಗ್ಗೆ ಆಗಿದೆ.            ಮೇಲ್ಕಂಡ ದೇಶದ ಪ್ರಜೆಗಳು ಈಗಲೂ ಹರಿದು ಬಂದು ಭಾರತದ ಜನಸಂಖ್ಯೆ ಉಲ್ಮಾನ ಗೊಳ್ಳುವದಿ...

ಸೀತೆ ಆ ಜಿಂಕೆಯನ್ನು ಬಯಸಿದ್ದೇಕೆ ?

Image
                          ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಾಮಾಯಣದ ಬಗ್ಗೆ? ರಾಮಾಯಣ ಅಂದೊಡನೆ ನಮ್ಮ ಕಣ್ಣುಮುಂದೆ ಬರುವದು ಸೀತಾ ರಾಮರ ೧೪ ವರ್ಷ ವನವಾಸ, ರಾವಣ ಸೀತಾಪಹರಣ, ಆಂಜನೇಯನ ಲಂಕಾ ದಹನ, ಕೈಕೆಯ ಪುತ್ರ ವ್ಯಾಮೋಹ ಮತ್ತಿನ್ನಿತರ ಸನ್ನಿವೇಶಗಳು. ಹಾಗೆಯೇ ಈ ರಾಮಾಯಣವು ನೆಲಕ್ಕೊಂದರಂತೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಒಳಗೊಂಡು ವಾಲ್ಮೀಕಿ ರಾಮಾಯಣ, ತುಳಸಿ ರಾಮಾಯಣ, ಕಂಬ ರಾಮಾಯಣ ಹಾಗೂ ಇನ್ನಿತರ ಹೆಸರುಗಳಲ್ಲಿ ಕರೆಯಲ್ಪಡುತ್ತದೆ.           ರಾಮಾಯಣ ಕಥೆಯಲ್ಲಿ ಬರುವ ಬಹುಮುಖ್ಯ ಸನ್ನಿವೇಶಗಳಲ್ಲಿ ಒಂದಾದ "ಸೀತಾಪಹರಣ" ಕಥೆಯಲ್ಲಿ ನನ್ನನ್ನು ಕಾಡುವ ಪ್ರಶ್ನೆ "ಸೀತೆ ಏಕೆ ಅಷ್ಟೊಂದು ಜಿಂಕೆಗಾಗಿ ಹಾತೊರೆದು ರಾಮ ಅದರ ಬೆನ್ನಟ್ಟಿ ಹೋಗುವಂತಾಯಿತು ಅಂತ?".... ಈ ವಿಷಯವನ್ನು ಚರ್ಚಿಸುವ ಮೊದಲು ಒಂದು ಚಿಕ್ಕ ಹಿನ್ನೆಲೆ: ರಾಮ ಮತ್ತು ಲಕ್ಷ್ಮಣರು ವಿಶ್ವಾಮಿತ್ರ ಮಹರ್ಷಿಗಳ ಆಶ್ರಮದಲ್ಲಿ ವಿದ್ಯಾರ್ಜನೆ ಗೆಂದು ನೆಲೆಸಿದ್ದಾಗ ಮಾರೀಚ ಮತ್ತು ಸುಬಾಹು ಎಂಬ ಇಬ್ಬರು ರಾಕ್ಷಸರು ವಿಶ್ವಾಮಿತ್ರರ ಯಾಗಕ್ಕೆ ಭಂಗ ತರುತ್ತಿದ್ದರು. ಆಗ ವಿಶ್ವಾಮಿತ್ರರ ಆಜ್ಞೆಯೆಂತೆ ರಾಮ ಲಕ್ಷ್ಮಣರು ಈ ಇಬ್ಬರು ರಾಕ್ಷಸರನ್ನು ಸಂಹರಿಸಲು ಸಜ್ಜಾದಾಗ, ಸುಬಾಹುವು ರಾಮನ ಬಾಣಕ್ಕೆ ಹತನಾಗುತ್ತಾನೆ. ಆದರೆ ಮಾರೀಚ ಅದೆಲ್ಲೋ ಗುಹೆಯಲ್ಲಿ ...

ಗರ್ಭ ಗುಡಿ [Episode - 1]

Image
              ಕಾಲ ಚಕ್ರ ತೀರಗತಿರತದ. ಇವತ್ತ ನಗಲಿಕತ್ತವರು ನಾಳೆ ಅಳತಾರ ಮತ್ತ ಅಳಕೋತ ಕೂತವರಿಗೆ ನಾಳೆ ನಗಹಂಗ ದೇವರು ಮಾಡತಾನ.  ನಮ್ಮ ಕೈಯ್ಯಾಗ ಏನೂ ಇಲ್ಲ! ಎಲ್ಲ ಭಗವಂತನಾಟ ಸಂಗಣ್ಣ ಅಂತ ತುಂಬು ಗರ್ಭಿಣಿ ಶಾಂತಾ ಕಟ್ಟಿಮೇಲೆ ಕೂತಕೊಂಡು ಮನಿ ಆಳಮಗ ಸಂಗಣ್ಣನ ಜೊತಿ ಮಾತಾಡ್ಕೋತ ಕೂತಾಳ. ಶಾಂತಾ ಹೆಸರಿಗೆ ತಕ್ಕಹಂಗ ಶಾಂತಾ ಸ್ವಭಾವದ ಹೆಣ್ಣು. ಸಣ್ಣಕಿ ಇದ್ದಾಗ ತಾಯಿ ಕಳಕೊಂಡು ಅಪ್ಪನ ಮಗಳಾಗಿ ಬೆಳದಕಿಗೆ ತವರಮನಿ ಅಂದ್ರ ಖರೇನ ಏನಂತ ಗೊತ್ತಿಲ್ಲ. ಎರಡನೇ ಲಗ್ನ ಆದ್ರ ಮಗಳ ಮ್ಯಾಲೆ ಎಲ್ಲಿ ಪ್ರೀತಿ ಕಡಿಮಿ ಆಗ್ತದ ಅಂತ ವೆಂಕಣ್ಣ ಮಾಸ್ತರೂ ಹೆದರಿ ಎರಡನೇ ಲಗ್ನದ ಉಸಾಬರಿಗೆ ಹೋಗ್ಲಿಲ್ಲ. ಮಗಳಿಗೆ ಅಪ್ಪ, ಅಪ್ಪಗ ಮಗಳು ಅಂತ ಜೀವನ ಹಾಕಿಕೊಂಡು ಬಂದಿದ್ರು ಇಬ್ಬರು. ಮಾಸ್ತರಕಿ ನೌಕರಿಯೊಳಗ ಸಿಗ ೧೦೦ ರೂಪಾಯಿ ಪಾಗಾರದಾಗ ಮನಿ ಕಟ್ಕೊಂಡು ಎಲ್ಲೂ ಸಾಲ ಮಾಡದಹಂಗ ಜೀವನ ಮಾಡ್ಕೊಂಡು ಬಂದವರು ನಮ್ಮ ವೆಂಕಣ್ಣ ಮಾಸ್ತರು. ಕಟ್ಟಿದ ಮನಿಯಾದ್ರು ನಿಮ್ಮ ವಾರ್ಸಾದರ ಮಗಗ ಕೊಟ್ಟು ಹೋಗ್ಲಿಕ್ಕಾದ್ರೂ ಎರಡನೇ ಲಗ್ನ ಮಾಡ್ಕೋರಿ ಸರ.... ಅಂದವರ ಮಾತು ಕಿವಿಗೆ ಹಕ್ಕೋಲಾರ್ದ ತಾನೇನು, ತನ್ನ ಮನಿ ಏನು ಅಂತ ಇರ್ತಿದ್ರೂ ವಿಧಿ ಬಿಡಬೇಕಲ್ಲ, ಹೆಂಡತಿ ಸತ್ತು ಮೊದಲ ಜೀವನದಾಗ ಖಿನ್ನ ಆಗಿದ್ದ ವೆಂಕಣ್ಣ ಮಾಸ್ತರಿಗೆ ವಯಸ್ಸಾಗ್ತಿದ್ದ ಮಗಳು ಇನ್ನ ದೊಡ್ಡಾಕಿ ಆಗವಳ್ಳು ಅಂತ ಇನ್ನೊಂದ್ ಕಡೆ ಖೇದ.   ...

ಮಾತೇ ಮಾಣಿಕ್ಯ !

Image
               ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವಾದ ವಸ್ತು ಯಾವುದು ಅಂದರೆ ಅದು " ಮಾತು "!  ಎಷ್ಟು ಗಾದೆಗಳು ಬೇಕು ಮಾತಿನಬಗ್ಗೆ? "ಮಾತು ಮನೆ ಕೆಡಿಸ್ತು ತೂತು ಓಲೆ ಕೆಡಿಸ್ತು" ,  "ಆಡಿದ ಮಾತು ಕಳೆದ ಸಮಯ ಒಡೆದುಹೋದ ಮುತ್ತಿನಂತೆ" ಮತ್ತಿನ್ನಿತರೆ ಗಾದೆಗಳು ಮಾತಿನ ಸೂಕ್ಷ್ಮತೆಯನ್ನು ಬಣ್ಣಿಸುತ್ತವೆ. ಒಂದು ಮಾತು ಏನೆಲ್ಲ ರಾಧಾಂತಗಳನ್ನು ಸೃಷ್ಟಿಸಬಲ್ಲದು ಅಂತ ಹುಡುಕಿದರೆ ನಮಗೆಲ್ಲ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬಸವಣ್ಣನವರು ನಾವಾಡುವ ಮಾತು ಹೇಗಿರಬೇಕು ಎನ್ನುವದರ ಬಗ್ಗೆ ಹೀಗೆ ಹೇಳುತ್ತಾರೆ "ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!  ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಅಂತ. ನಮಗೆ ವಿದ್ಯೆ ಯೊಂದಿದ್ದರೆ ಅಷ್ಟೇ ಸಾಕಾಗದು, ನಾವು ನಮ್ಮ ವಿದ್ಯಯನ್ನು ಹೇಗೆ ಇನ್ನೊಬ್ಬರಿಗೆ ತಿಳಿ ಹೇಳುತ್ತೇವೆ ಅನ್ನುವದೂ ಪ್ರಮುಖಯವಲ್ಲವೇ! ಹೀಗೊಂದು ಉದಾಹರಣೆ ಹೇಳುತ್ತೇನೆ ಚಿಕ್ಕವರಿದ್ದಾಗ ನಾವಿದನ್ನು ಕೇಳಿ ಬೆಳಿದಿದ್ದೇವೆ ನಿಜ, ಇನ್ನೊಮ್ಮೆ ಮೆಲಕು ಹಾಕೋಣ!          ಒಬ್ಬ ರಾಜ ತನ್ನ ಆಸ್ಥಾನದಲ್ಲಿದ್ದ ಎಲ್ಲಾ ಜ್ಯೋತಿಷಿಗಳನ್ನು ಒಮ್ಮೆ ಬರಹೇಳಿದ. ಅದರಲ್ಲಿಯೇ ಅತೀ ಶ್ರೇಷ್ಠರಾದ ಇಬ್ಬರು ಜ್ಯ...